Mudgal Fort: ಒಂದು ಹೆಣ್ಣಿಗಾಗಿ ವಿಜಯನಗರ, ಬಹಮನಿ ನಡುವೆ ನಡೆಯಿತು ಘೋರ ಯುದ್ಧ!
ಅಕ್ಕಸಾಲಿಗ ಯುವತಿ ಮತ್ತು ದೇವರಾಯ Mudgal Fort ದಕ್ಷಿಣ ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದ ಕೋಟೆಗಳಲ್ಲಿ ಒಂದಾಗಿದೆ. ಇದು ಕೇವಲ ಕಲ್ಲಿನಿಂದ ಕಟ್ಟಿದ ರಕ್ಷಣಾ ಕೋಟೆ ಮಾತ್ರವಲ್ಲ; ದಕ್ಷಿಣ ಭಾರತದ ರಾಜಕೀಯ, ಯುದ್ಧ ಮತ್ತು ಸಾಮ್ರಾಜ್ಯಗಳ ಪ್ರತಿಷ್ಠೆಯ ಸಂಕೇತವಾಗಿತ್ತು. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಲ್ಲಿ ಇರುವ ಈ ಕೋಟೆ, ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ಮಧ್ಯದಲ್ಲಿರುವ ಫಲವತ್ತಾದ 'ದೋಆಬ್' ಪ್ರದೇಶದ ಹೃದಯಭಾಗದಲ್ಲಿತ್ತು. ಕೃಷಿಗೆ ಸಮೃದ್ಧವಾಗಿದ್ದ ಈ ನೆಲ ವ್ಯಾಪಾರ ಮಾರ್ಗಗಳಿಗೂ ಪ್ರಮುಖವಾಗಿತ್ತು. ಆದ್ದರಿಂದ ಈ ಪ್ರದೇಶವನ್ನು ಯಾರೇ ಹಿಡಿದಿದ್ದರೂ, ದಕ್ಷಿಣ ಭಾರತದ ರಾಜಕೀಯದ ಮೇಲೂ ಅವರ ಪ್ರಭಾವ ಹೆಚ್ಚಾಗುತ್ತಿತ್ತು. ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮುದ್ಗಲ್ ಕೋಟೆಯನ್ನು ಕ್ರಿ.ಶ. 1053ರ ಸುಮಾರಿಗೆ ಮುದ್ದಪ್ಪ ರೆಡ್ಡಿ ಎಂಬ ಸ್ಥಳೀಯ ನಾಯಕ ನಿರ್ಮಿಸಿದ್ದಾನೆ ಎಂದು ಹೇಳಲಾಗುತ್ತದೆ. ನಂತರದ ಕಾಲದಲ್ಲಿ ಈ ಕೋಟೆ ಚಾಲುಕ್ಯರು, ಹೋಯ್ಸಳರು, ಬಹಮನಿಗಳು ಮತ್ತು ವಿಜಯನಗರ ಸಾಮ್ರಾಜ್ಯದ ಅಧೀನಕ್ಕೆ ಬಂತು. ಅದರಲ್ಲೂ ಬಹಮನಿ ಮತ್ತು ವಿಜಯನಗರ ಸಾಮ್ರಾಜ್ಯಗಳ ಪಾಲಿಗೆ ಈ ಕೋಟೆ ಅತ್ಯಂತ ಪ್ರತಿಷ್ಠೆಯ ಸಂಕೇತವಾಗಿತ್ತು. ಇತಿಹಾಸದ ದಾಖಲೆಗಳ ಪ್ರಕಾರ, ಈ ಕೋಟೆಯ ಮೇಲಿನ ಹಿಡಿತಕ್ಕಾಗಿ ಎರಡು ಸಾಮ್ರಾಜ್ಯಗಳ ನಡುವೆ ಅನೇಕ ಯುದ್ಧಗಳು ನಡೆದಿವೆ. ಆದರೆ ಅವುಗಳಲ್ಲಿ ಅತ್ಯಂತ ವಿಚಿತ್ರವಾಗಿ ನ...